ಧೂರ್ತ

ಹೊಲೆಯ ನಿಕೃಷ್ಟ
ಮಣ್ಣಿನ ಮಗ
ಮಣ್ಣಿನ ವಾಸನೆಗೆ
ಹುಟ್ಟಿದ ತಪ್ಪಿಗೆ
ಹುಟ್ಟಿದ ಮಣ್ಣಿನ ನೆಲವನ್ನೆ
ದುರ್ಗಂಧಗೊಳಿಸಿ
ತನ್ನ ಧೂರ್ತ ಮಹತ್ವಾಕಾಂಕ್ಷೆಗೆ
ಉಸಿರು ಹೋಗುವ ಮೊದಲು
ಕೆಂಪು ದುರ್ಗದ ತುದಿಯನ್ನೇರಿ
ದೇಹ ಬಲ ಉಡುಗಿದ್ದರೂ
ನೀತಿಗೆ ಕ್ಷಯ ಹಿಡಿದು
ಅಧಿಕಾರದ ಮದದಿಂದ, ಪದದೊರೆತ
ತುಷ್ಟಿಯ ತೊರೆಯುಕ್ಕಿ ತಾನು
ಸೆರೆ ಕುಡಿದ ಕಪಿಯಾದರೂ
ಜನತೆಗೆ ಕೊಡುವ ಸಂದೇಶವೆಂದು
ಬಾಯಿಗೆ ಬಂದುದನೊದರಿ-
ಈ ಕೆಲವು ದಿನಗಳ ಹಿಂದೆ
ಗಾಂಧೀ ಸಮಾಧಿಯ ಎದುರು
ತಾನು ಮಾಡಿದ ಪಣದ, ವೃಣದ ಮುಖಕ್ಕೆ
ರಾಡಿ ಎರಚು-
ಸ್ವರ್ಗದಲ್ಲಿರುವ ಗಾಂಧಿ
ಜನನಾಯಕನೆಂದು
ಜನರಿಗೆ ಟೋಪಿ ಹಾಕುವ
ಈ ಡೋಂಗಿ ಮಾಡಿದ
ಅಗಸತನಕ್ಕೆ ತುಕ್ಕು ಹಿಡಿದು
ದರಿದ್ರಗೊಂಡ ಅಧಪತನಕ್ಕೆ
ನಾಚಿ, ಕಂಬನಿಯ ತೊರೆಯನ್ನು
ಸುರಿಸುತ್ತಿರಬಹುದು –
ಅದರಲ್ಲಿ ಕಂತಿ ಈ ಪಾಖಂಡಿ
ನಿರ್ನಾಮಗೊಂಡಾಗ
ಮಣ್ಣಿನಂರಾಳದಲಿ ಹೂತು ಹೋದಾಗ
ಆರೋಗ್ಯಕರ ಮೊಳಿಕೆಯೊಂದು
ನೆಲಬಿರಿದು ಹೊರಬರುವುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನಲ್ಲ ನೀನಲ್ಲ
Next post ಕಾಣಲೆಂದು ನಿಂದಲ್ಲೇ ನಿಂದರೇನು ಬಂತು?

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys